Slide
Slide
Slide
previous arrow
next arrow

ತಗ್ಗಿಗೆ ಬಿದ್ದ ಬಸ್, ಪ್ರಯಾಣಿಕರಿಗೆ ಗಾಯ

300x250 AD

ಹೊನ್ನಾವರ: ತಾಲೂಕಿನ ಗೇರುಸೊಪ್ಪಾ ಸುಳೆಮುರ್ಕಿ ಕ್ರಾಸ್ ಸಮೀಪ ರಾ.ಹೆ 69ರಲ್ಲಿ ಕೆಎಸ್ ಆರ್ ಟಿಸಿ ಬಸ್ ಚಾಲಕ ಅತಿವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಲಾಯಿಸಿದ ಪರಿಣಾಮ ಬಸ್ ಹೆದ್ದಾರಿ ಬದಿಯ ತಗ್ಗಿನಲ್ಲಿ ಬಿದ್ದು ಪ್ರಯಾಣಿಕರು ಗಾಯಗೊಂಡ ಘಟನೆ ನಡೆದಿದೆ.

ಸಾಗರ ಕಡೆಯಿಂದ ಹೊನ್ನಾವರ ಮಾರ್ಗವಾಗಿ ಬಸ್ ಚಲಾಯಿಸುತ್ತಿರುವಾಗ ಘಟನೆ ನಡೆದಿದೆ. ಆರೋಪಿತ ಬಸ್ ಚಾಲಕ ಗೋಪಾಲ ಅನಂತನಾಗ ಎಂದು ಗುರುತಿಸಲಾಗಿದೆ. ಗಾಯಾಳುಗಳೆಲ್ಲರು ಬೆಂಗಳೂರ ಚಿಕ್ಕಮಾವಳ್ಳಿಯ ನಿವಾಸಿಗಳಾದ ಎನ್.ಮಂಜುನಾಥ , ಸಮ್ಯಕಪ್ರವರ್ಧನ್ ಬಿ.ಎಮ್,ಬನ್ನೇರುಘಟ್ಟ ರಸ್ತೆ ವಿವರ್ಸ ಕಾಲೋನಿ ಗೋಟ್ಟಿಗೇರೆಯ ಮುನಿಶಂಕರ, ಗುಣಶೇಖರ, ಮೇಘನಾ ಮುನಿಶಂಕರ ಎನ್, ಜಿ.ಶಂಕರ, ಕಾರ್ತಿಕ.ಸಿ, ಹರ್ಷವರ್ಧನ ಎಂದು ಗುರುತಿಸಲಾಗಿದೆ. ಗಾಯಾಳುಗಳಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

300x250 AD
Share This
300x250 AD
300x250 AD
300x250 AD
Back to top